ರೇಣುಕ ಎಂಟೆರ್ಪೃಸೆಸ್ ಅವರ ದೇಶ ಪ್ರೇಮ ಅಂಡ್ ಯವ್ವನದ ಪ್ರೇಮದ ಹೊಳೆ ಒಳಗೊಂಡಿರುವ ಈ ‘ಮುತ್ತಿನ ಹನಿ’ ರಾಜ್ಯಂದಂತ ಬಿಡುಗಡೆ ಆಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಬರುತ್ತಿರುವ ಈ ಚಿತ್ರ ‘ಪ್ರೀತಿಸಿದವಳು ಮುಖ್ಯವೋ ಅಥವಾ ದೇಶ ಪ್ರೇಮ ಮುಖ್ಯವೋ’ ಎಂಬುದನ್ನು ಹೇಳುತ್ತದೆ.
ವೈಧ್ಯಕೀಯ ವೃತ್ತಿ ಇಂದ ಸಿನೆಮಾ ರಂಗಕ್ಕೆ ಡಾಕ್ಟರ್ ಗುರುರಾಜ್ ಕವಲುರ್ ಪರಿಚಯ ಆಗುತ್ತಿದ್ದಾರೆ. ಈ ಚಿತ್ರವೂ ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿರುವರು ನಿರ್ದೇಶಕ ರಾಜ ರೆಡ್ಡಿ. ಈ ಹಿಂದೆ ಇವರು ‘ಗಂಧದ ಗೊಂಬೆ’ ಚಿತ್ರ ನಿರ್ದೇಶನ ಮಾಡಿರುವರು.
ಬಿ ಶಂಕರ್ ಅವರ ಸಂಭಾಷಣೆ, ಲಕ್ಷ್ಮೀಕಾಂತ್ ಅವರ ಛಾಯಾಗ್ರಹಣ, ಜೋಸೆಫ್ ಅವರ ಸಂಗೀತ ಈ ಚಿತ್ರಕ್ಕಿದೆ.
ಶ್ರೀ ಮಂಜು ಈ ಚಿತ್ರದ ಕಥಾ ನಾಯಕ. ಚಿತ್ರದ ಕಥಾನಾಯಕ ಪ್ರಕಾರ ತಾಯಿ ಪ್ರೇಮ ಮತ್ತು ದೇಶ ಪ್ರೇಮ ಎರಡು ಒಂದೇ. ಸ್ವಾತಿ ನಾಯಕಿ. ದೇವಾನಂದ್, ಕಿಲ್ಲರ್ ವೆಂಕಟೇಶ್, ಬಿರದರ್, ಸುನೇತ್ರ, ಮಾಲತಿ ಸರ್ದೇಶಪಾಂಡೆ, ಮೈಖೇಲ್ ಮಧು, ಕುಣಿಗಲ್ ಭರತ್, ಪ್ರಸನ್ನ ಶೆಟ್ಟಿ ಹಾಗೂ ಇನ್ನಿತರರು ತಾರಾಗಣದಲ್ಲಿರುವರು.